★'ಹಾಸಿಗೆ ಇದ್ದಷ್ಟು ಕಾಲು ಚಾಚು'★
ಇದು ನಮ್ಮ ಹಿರಿಯರು ನಮಗೆ ಆಗಾಗ್ಗೆ ಹೇಳುತ್ತಾ ಬಂದ ಗಾದೆ. ಇರುವಷ್ಟರಲ್ಲಿ ನೆಮ್ಮದಿಯಾಗಿರು ಎಂದು ನಮಗೆ ಜೀವನ ಪಾಠ ಹೇಳಿದ್ದು ಹೀಗೆ.
ಆದರೆ ಈ ಗಾದೆ ಎಷ್ಟೊಂದು ಜನ ವಿರೋಧಿ ಎನ್ನುವುದು ಇದರಲ್ಲಿ ಅಡಕವಾಗಿರುವ. ಯಜಮಾನಿಕೆ ಸಂಸ್ಕೃತಿಯ ಅಂಶ ಗಮನಿಸಿದರೆ ಗೊತ್ತಾಗುತ್ತೆ. ಬಹಳ ಹಿಂದಿನಿಂದಲೂ ಆಳುವ ಯಜಮಾನರು ದುಡಿಯುವ ಜನರನ್ನು ಹೇಗೆ ನಡೆಸಿಕೊಂಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ.
ಒಡೆಯರಿಗಾಗಿ ದುಡಿದು ನಿತ್ರಾಣಗೊಂಡರೂ ಅವರಿಗೆ ಸಿಗಬೇಕಾದ ಫಲ ಸಿಗುತ್ತಿರಲಿಲ್ಲ. ಒಡೆಯ ‘ಕೃಪೆಮಾಡಿ' ಕೊಟ್ಟಿದ್ದರಲ್ಲೇ ಕಷ್ಟಪಟ್ಟು ಜೀವನ ಸಾಗಿಸಬೇಕಾದ ಪರಿಸ್ಥಿತಿ. ಆರಾಮವಾಗಿ ಕಾಲು ಚಾಚಿದರೆ ಕಾಲು ನೆಲಕ್ಕೆ ಬೀಳುತ್ತಿತ್ತು. ಸದಾ ಕೊರತೆಯಲ್ಲಿಯೇ ಬದುಕು ನೂಕಬೇಕಾದ ಸ್ಥಿತಿಗೆ ತಕ್ಕಂತೆ ಗಾದೆ ರೂಢಿಗೆ ಬಂದಿತು.
ಆದರೆ 'ಯಜಮಾನರಿಲ್ಲದ ಪ್ರಜಾಪ್ರಭುತ್ವದ' ಸಂದರ್ಭದಲ್ಲಿಯೂ ಈ ಗಾದೆ ಅನ್ವಯಿಸುತ್ತಿರುವುದೇ ದುರಂತ. ಈಗಲೂ ಹಾಸಿಗೆ ಮೀರಿ ಕಾಲು ಚಾಚುವುದು ಅಪರಾಧ ಎಂದು ಬಿಂಬಿಸಲಾಗುತ್ತಿದೆ. ಇಂದಿಗೂ ಯಜಮಾನಿಕೆ ಸಂಸ್ಕೃತಿಯ ಪಳೆಯುಳಿಕೆಗಳು ಉಳಿದಿವೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
ಹಾಗಾಗಿ ಈಗ ನಾವು ರೂಢಿಗೆ ತರಬೇಕಿರುವುದು, ‘ಕಾಲು ಚಾಚುವಷ್ಟೂ ಹಾಸಿಗೆ ಹಾಕು' ಎನ್ನುವ ಹೊಸ ಗಾದೆಯನ್ನು.
No comments:
Post a Comment